Odalala Kannada Kadambari Novels Free PDF Download |
Odalala Kannada Kadambari Novels Free PDF Download
How to Download Odalala Kannada Kadambari Novels PDF?
Download Odalala Kannada Kadambari Novels
Odalala Kannada Kadambari Novels Free Download in PDF Format
ಖಂಡವಿದೆಕೋ ಮಾಂಸವಿದೆಕೋ ಎನ್ನುತ್ತ ತಮ್ಮ ಕಥೆಗಳನ್ನು ಕನ್ನಡಿಗರಿಗೆ ಕೊಟ್ಟವರು ದೇವನೂರ ಮಹಾದೇವ. ಅಲ್ಲಿಂದ ಕೆಲಕಾಲ ಕಳೆದ ಮೇಲೆ ‘ಒಡಲಾಳ’ ಎಂಬೊಂದು ಕಥೆ ಬರೆದರು. ಓದಿದವರಿಗೆ ಗಂಗು ಹಿಡಿಸುವ ಕಥೆ. ಸಾಕವ್ವ ಅವಳ ಮಕ್ಕಳು ಮೊಮ್ಮಕ್ಕಳು ಕನ್ನಡ ಪ್ರಜ್ಞೆಯೊಳಗೆ ಬಂದು ಕುಳಿತರು. ಸಾಕವ್ವ ಹೇಳುವ ಯಮದವರ ಕತೆಗಾಗಿ ಜಾನಪದ ಪಂಡಿತರು, ಪುಟಗೌರಿ ನವಿಲಿನ ಚಿತ್ರಕ್ಕಾಗಿ ಕಲೆಗಾರರು, ದುಷ್ಟಿಕಮೀಷನರಿಗಾಗಿ ಸಾಹಿತ್ಯ ವಿಮರ್ಶಕರು, ಕತ್ತಲ ಲೋಕದಲ್ಲಿ ಪಳಾರನೆ ಗಡಿಯಾರದ ಮಿಂಚು ಮಿಂಚಿಸುವ ಗುರುಸಿದ್ಧನಿಗಾಗಿ ಬಂಡಾಯಗಾರರು ಹುಡುಕಾಟ ಮುಂದುವರೆಸಿದ್ದಾರೆ. ಒಡಲಾಳದ ಶಿವು ಈಗ ಈ ಕತೆಯನ್ನು ಓದುತ್ತಿರಬಹುದು. ಆ ಕತೆಯಲ್ಲಿ ತನ್ನ ಮಾದರಿಯನ್ನು ಕಂಡುಕೊಳ್ಳುತ್ತಿರಬಹುದು. ಒಡಲಾಳದಂತಹ ಕೃತಿಗಳು ಮಾತ್ರವೇ ಒಂದು ಸಂಸ್ಕೃತಿಯಲ್ಲಿ ಕ್ರಿಯಾವರ್ತನೆಗಳನ್ನು ಹುಟ್ಟಿಹಾಕಬಲ್ಲವು. ಕೃತಿಯನ್ನು ಅರಿಯಲು ಲೋಕದ ಮಾನದಂಡವಗಳನ್ನು ಹುಡುಕುವ ನಮಗೆ ‘ಅಯ್ಯಾ ಹಾಗಲ್ಲ ಈ ಕೃತಿಯ ಮೂಲಕ ಲೋಕವನ್ನು ಅರಿಯಲು ಸಾಧ್ಯವೇ ನೋಡು’ ಎಂದು ಇಂಥ ಕೃತಿಗಳು ಕೇಳುತ್ತವೆ.
Odalala Kannada Kadambari Novels Free Pdf Download
About Odalala Kannada Kadambari Novels
ಒಡಲಾಳ ದೇವನೂರು ಮಹದೇವ ಅವರ ಮಹತ್ವದ ಕಿರುಕಾದಂಬರಿ. ೧೯೭೮ರಲ್ಲಿ ಬರೆದ ಒಡಲಾಳ ಆಕೃತಿಯಲ್ಲಿ ಕಿರಿದಾದರೂ ಕಲೆ ಹಾಗೂ ಸಾಮಾಜಿಕ ಪ್ರಸ್ತುತತೆ - ಈ ಎರಡು ದೃಷ್ಟಿಗಳಿಂದಲೂ ಬಹಳ ಮಹತ್ವದ ಕೃತಿ. ಈ ಕೃತಿಯು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ, ೧೯೮೭ರಲ್ಲಿ ಭಾರತೀಯ ಭಾಷಾ ಪರಿಷತ್ನ ಪ್ರಶಸ್ತಿಯನ್ನು ಪಡೆಯಿತು.
- ಸಾಕವ್ವ ಆ ಹಟ್ಟಿಯ ಯಜಮಾನಿ. ತನ್ನ ದುಡಿಮೆಯಿಂದ ನಾಲ್ಕು ಕಂಬಗಳ ಆ ತೊಟ್ಟಿ ಹಟ್ಟಿಯನ್ನು ಕಟ್ಟಿದ್ದೇನೆ ಎಂಬ ಹೆಮ್ಮೆ ಅವಳದು. ಐದು ಮಕ್ಕಳ ತಾಯಿ-ಮೂರು ಗಂಡು, ಎರಡು ಹೆಣ್ಣು. ನಾಲ್ಕು ಎಕರೆ ಜಮೀನಿದ್ದರೂ, ಮಳೆಯನ್ನು ನಂಬಿದ್ದ ಭೂಮಿಯಾದ ಕಾರಣ ಅವಳ ಸಂಸಾರ ಬಹುಮಟ್ಟಿಗೆ ಕೂಲಿನಾಲಿಯಲ್ಲೇ ಸಾಗುತ್ತಿದೆ. ಆ ತೊಟ್ಟಿ ಮನೆಯ ಒಂದು ಭಾಗದಲ್ಲಿ ಅವಳ ಹಿರಿಯ ಮಗ ಕಾಳಣ್ಣ, ಅವನ ಹೆಂಡತಿ ಪ್ರತ್ಯೇಕ ಒಲೆ ಹೂಡಿದ್ದಾರೆ. ಅವರಿಗೆ ಮಕ್ಕಳಿಲ್ಲ.
- ಇನ್ನೊಂದು ಭಾಗದಲ್ಲಿ ಎರಡನೆಯ ಮಗ ಸಣ್ಣಯ್ಯ, ಅವನ ಹೆಂಡತಿ ಚೆಲುವಮ್ಮ, ಒಂದು ಕೈಗೂಸು ಸೇರಿದಂತೆ ನಾಲ್ಕು ಪುಟ್ಟ ಮಕ್ಕಳು ಪ್ರತ್ಯೇಕವಾಗಿದ್ದಾರೆ. ಮೂರನೆಯವ ಗುರುಸಿದ್ದು. ನಡುಭಾಗ ಅವನದು. ಆದರೆ ಅವನು ಮದುವೆಯಾಗಿಲ್ಲ. ಗಾರೆ ಕೆಲಸ, ರೇಷ್ಮೆ ಗೂಡು ವ್ಯಾಪಾರ, ಚಿಲ್ಲರೆ ಅಂಗಡಿ, ದನಗಳ ದಳ್ಳಾಳಿ ವ್ಯವಹಾರ ಎಲ್ಲ ಹಿಡಿದು ಈಗ ಗಾರೆ ಕೆಲಸಕ್ಕೆ ಅಂಟಿಕೊಂಡಿದ್ದಾನೆ. ನಾಟಕದಲ್ಲಿ ಪಾರ್ಟು ಮಾಡುವ ಖಯಾಲಿ. ಸಾಮಾನ್ಯವಾಗಿ ಮಾರಿಗುಡಿಯಲ್ಲಿರುತ್ತಾನೆ.
- ಇವನು ಹೊರ ಜಗತ್ತಿನ ಪರಿಚಯ ಉಳ್ಳವನು. ಸಾಕವ್ವನ ಹಿರೀ ಮಗಳು ಗೌರಮ್ಮನ ಗಂಡ ಊರೂರು ಅಲೆಯುವವನು. ಅದರಿಂದ ಅವಳು ತನ್ನ ಎರಡು ಗಂಡು ಮಕ್ಕಳೊಂದಿಗೆ ಆ ಹಟ್ಟಿಯಲ್ಲೇ ಇದ್ದಾಳೆ. ಹಿರಿಯ ಮಗ ಸದಾ ಮಲಗಿರುವ ರೋಗಿ; ಕಿರಿಯವ ಶಿವು ಶಾಲೆಗೆ ಹೋಗುವ ಹುಡುಗ. ಸಾಕವ್ವನ ಕಿರಿ ಮಗಳು ಪುಟ್ಟಗೌರಿ. ಸಾಕವ್ವ ತನ್ನ ಒಂದು ಹುಂಜವನ್ನು ದೇವರಿಗೆ ಬಿಟ್ಟಿದ್ದಾಳೆ. ಅದು ಹಿಂದಿನ ದಿನ ಮನೆಗೆ ಬಂದಿಲ್ಲ.
- ರಾತ್ರಿ ಆದಾಗ ಅವಳು ಅದನ್ನು ಹುಡುಕಿ ಅಲೆದಿದ್ದಳಾದರೂ ಅದು ದೊರೆತಿರಲಿಲ್ಲ. ಇವತ್ತು ಬೆಳಿಗ್ಗೆಗೆ ಏಳುವಾಗಲೇ ಅವಳಿಗೆ ಅದರದೇ ಚಿಂತೆ. ಅದನ್ನು ಹುಡುಕಿಕೊಂಡು ಊರು ತಿಪ್ಪೆಗಳಲ್ಲೆಲ್ಲಾ ತಿರುಗಿ, ಸುಸ್ತಾಗಿ ಮನೆಗೆ ಬಂದು ಕಂಡವರ ಮೇಲೆಲ್ಲಾ ಹಾರಾಡುತ್ತಿದ್ದಾಳೆ. ಅಂಥ ಸಮಯದಲ್ಲಿ ಮಗಳು ಗೌರಮ್ಮ ನೀರು ತಂದುಕೊಟ್ಟಿದ್ದಕ್ಕೆ ಖುಷಿಗೊಂಡು ಅವಳ ಎರಡನೆಯ ಮಗ ಶಿವುವಿಗೆ ತನ್ನ ಆಸ್ತಿ ಬರೆಯುವುದಾಗಿ ಸಾಕವ್ವ ಹೇಳಿ ದುಃಖದ ರಾಗ ಹಾಡತೊಡಗಿದಳು,.
- ಎಂದಿನ ಸೌಹಾರ್ದತೆ ಮೂಡುತ್ತದೆ. ಮಧ್ಯಾಹ್ನದಲ್ಲಿ ಶಿವು ಇಸ್ಕೂಲು ಮುಗಿಸಿ ಸ್ಕೂಲುಪ್ಪಿಟ್ಟು ಹಿಡಿದು ಬಂದ. ಬಿಸಿಲಿನ ಧಗೆಗೆ ಎಲ್ಲರೂ ಅಲ್ಲಲ್ಲಿ ಬಿದ್ದುಕೊಂಡಿದ್ದರು. ಪುಟ್ಟಗೌರಿಯ ಮಾತಿನಂತೆ ರೋಗಿ ಅಣ್ಣನಿಗೂ ಒಂದು ಪಾಲು ನೀಡಿ ಶಿವು ಉಪ್ಪಿಟ್ಟು ತಿಂದ. ಆ ನಡುವೆ ಪುಟ್ಟಗೌರಿ ಈಚಲ ಕಡ್ಡಿಗೆ ನೀಲಿ ಹಚ್ಚಿಕೊಂಡು ಕಾಲಿನಿಂದ ಆರಂಭಿಸಿ ಸುಂದರವಾದ ನವಿಲಿನ ಚಿತ್ರ ಬರೆದಳು. ಶಿವು ಅಜ್ಜಿಗೆ ಪುಟ್ಟಗೌರಿ ನವಿಲು ಬರೆದುದನ್ನು ಹೇಳಿದಾಗ ಸಾಕವ್ವ ಏನೋ ಅಡ್ಡ ಮಾತಾಡಿದಳು.
- ಪುಟ್ಟಗೌರಿ ಆ ನವಿಲಿನ ಜೋಡಿಗೆ ಅದರ ಎದುರು ಭಾಗದಲ್ಲಿ ಇನ್ನೊಂದು ಅಂತಹದೇ ನವಿಲು ಬಿಡಿಸಿದಳು. ಸಂಜೆ ವೇಳೆಗೆ ಸಾಕವ್ವ ಶಿವುವನ್ನು ಪುಸಲಾಯಿಸಿ ಹುಂಜ ಹುಡುಕಲು ಹೊರಟಳು. ಹೋಗುವಾಗ ಒಂದು ಲೋಟವನ್ನೂ ಒಯ್ದು, ಇಡೀ ಕೇರಿಯನ್ನು ತಿರುಗಿ ದೂರದ ನೆಂಟರೊಬ್ಬರ ಮನೆಯಿಂದ, ಅದರ ತುಂಬ ಸಾರು ತಂದಳು. ಹುಂಜ ಸಿಕ್ಕಲಿಲ್ಲ. ಕತ್ತಲಾದ ಮೇಲೆ ಕಾಳಣ್ಣ ಬೆನ್ನ ಮೇಲೆ ಒಂದು ಮೂಟೆ ಹೊತ್ತು ತಂದ. ಅವನ ಹೆಂಡತಿ ಉರಿ ಮಾಡಿದಳು.
- ಮನೆಯವರೆಲ್ಲರೂ ಸೇರಿಕೊಂಡು ಅವನು ತಂದಿದ್ದ ಕಳ್ಳೇಕಾಯನ್ನು ಬಿಡಿಸಿ ತಿನ್ನಲಾರಂಭಿಸಿದರು. ಸಿಪ್ಪೆ ಉರಿಗೆ ಹೋಯಿತು. ಶಿವು ಮತ್ತು ಪುಟ್ಟಗೌರಿ ಹೊರಕ್ಕೆ ಹೋಗಿ ಮಾರಿಗುಡಿಯಿಂದ ಗುರುಸಿದ್ದುವನ್ನೂ ಕರೆತಂದರು. ಬೆಳಗಿನ ಜಗಳವನ್ನೆಲ್ಲ ಮರೆತು ಸಕಲರೂ ಆ ಕಳ್ಳೇಕಾಯಿ ಯಜ್ಞದಲ್ಲಿ ಪಾಲ್ಗೊಂಡರು. ಕೊನೆಗೆ ಹಾಲಿಲ್ಲದ ಬೆಲ್ಲದ ಟೀ ಕಾಯಿಸಿ ಕುಡಿದು ಮಲಗಿದರು. ಗುರುಸಿದ್ದು ಹೊರಟುಹೋದ.
- ಆ ಹೊತ್ತಿಗೆ ಪೊಲೀಸ್ ಕಾನಸ್ಟೆಬಲ್ ರೇವಣ್ಣ ಹೊರಗಿನಿಂದ ಆ ಮನೆಗೆ ಚಿಲುಕ ಹಾಕಿದ.ಹಲವು ತಿಂಗಳುಗಳಿಂದ ಸಾಹುಕಾರ್ ಎತ್ತಪ್ಪನವರು ಮಿಲ್ಲಿನ ಕಡಲೆಕಾಯಿ ಲಾಟಿನಲ್ಲಿ ಆಗಾಗ ಒಂದು ಮೂಟೆ ಕಳುವಾಗುತ್ತಿದೆ ಎಂದು ಪೊಲೀಸ್ ಇನಸ್ಪೆಕ್ಟರಗೆ ಹೇಳುತ್ತಿದ್ದರು. ಈಗ ಅದರ ಪತ್ತೆಗೆ ಪೀಸಿ ರೇವಣ್ಣ ನೇಮಕನಾಗಿದ್ದ. ಅವನು ಕಂಬಳಿ ಹೊದ್ದು ಕೂತು ನೋಡುತ್ತಿರುವಾಗ ದಪ್ಪಕ್ಕೆ, ಎತ್ತರಕ್ಕೆ ಇದ್ದ ಒಬ್ಬ ಚೀಲಕ್ಕೆ ಕಡಲೆಕಾಯಿ ತುಂಬಿಕೊಂಡು ಹೊರಟ. ರೇವಣ್ಣ ಹಿಂಬಾಲಿಸಿದ.
- ಅವನು ಬಂದು ಸಾಕವ್ವನ ಹಟ್ಟಿಗೆ ನುಗ್ಗಿದ. ಇಡೀ ಕಳ್ಳರ ಜಾಲವನ್ನೇ ಪತ್ತೆ ಮಾಡೋಣ ಎಂಬ ತಾಳ್ಮೆಯಿಂದ ರೇವಣ್ಣ ಆ ಮನೆಗೆ ಬಂದು ಹೋಗುವವರನ್ನು ನಿಗಾ ಮಡಗಿ ನೋಡುತ್ತಾ ಇದ್ದ. ಪೀಚಲ ಸಣ್ಷ್ಟುಣಯ್ಯ ಬಂದದ್ದು, ನೆರೆಮನೆ ಕಾಳಕ್ಕ ಬಂದು ಬಂದು ಸೇರಷ್ಟು ಏನನ್ನೋ ಪಡೆದುಕೊಂಡುದು, ಒಂದು ಹುಡುಗ-ಹುಡುಗಿ ಎಲ್ಲಿಗೋ ಹೋಗಿದ್ದು, ಇನ್ನೊಬ್ಬನ ಕರೆದುಕೊಂಡು ಬಂದದ್ದು, ಅವನು ಮತ್ತೆ ಹೊರಟು ಮಾರಿಗುಡಿ ಕಡೆಗೆ ಹೋಗಿದ್ದು - ಎಲ್ಲಾ ಅವನ ಗಮನಕ್ಕೆ ಬಂತು.
- ಊರೆಲ್ಲ ಗೊರಕೆ ಹೊಡೆಯಲು ಆರಂಭಿಸಿದಾಗ ಅವನಿಗೂ ನಿದ್ದೆ ಕಾಡಿತು. ಆಗ ಎದುರಿನ ಸಾಕವ್ವನ ಹಟ್ಟಿಗೆ ಹೊರಗಿನಿಂದ ಚಿಲುಕ ಹಾಕಿ ಬಂದು ಕೂತ. ಮೊದಲ ಬೆಳಕು ಮೂಡಿದಾಗಲೇ ಅವನು ಎದ್ದು ಸಾಹುಕಾರರ ಆಳನ್ನು ಎಬ್ಬಿಸಿ ಸುದ್ದಿ ತಿಳಿಸಿ ಬರಲು ಸ್ಟೇಷನ್ನಿಗೆ ಓಡಿಸಿದ. ಬೆಳಕು ಹರಿಯೊ ಹೊತ್ತಿಗೆ ಜೇಲಿನಲ್ಲಿ ಪೊಲೀಸರು, ದಫೇದಾರ, ಇನ್ಸ್ ಪೆಕ್ಟರ್ ಬಂದರು. ರೇವಣ್ಣ ವರದಿ ಒಪ್ಪಿಸಿದ. ಮನೆ ಕದ ತೆರೆಸಿ ಒಳಕ್ಕೆ ನುಗ್ಗಿದ ಪೊಲೀಸಿನವರು ಮೂಲೆ ಮೂಲೇನೂ ಸೀಸಿದರು.
- ಕಾಳಣ್ಣನನ್ನು, ಮನೆ ಜನವನ್ನು , ಸಾಕವ್ವನನ್ನು, ಪುಟ್ಟಗೌರಿ, ಗುರುಸಿದ್ದು-ಎಲ್ಲರನ್ನೂ ಹೆದರಿಸಿದರು. ಅದರೇನು? ಕಳ್ಳತನಕ್ಕೆ ರುಜುಮಾತಾಗಿ ಒಂದೇ ಒಂದು ಬೊಗಸೆ ಕಡಲೆಕಾಯಾಗಲಿ, ಸಿಪ್ಪೆಯಾಗಲಿ ಪತ್ತೆ ಆಗಲಿಲ್ಲ. ಎತ್ತಪ್ಪನವರೂ ಅಲ್ಲಿಗೆ ಬಂದರು. ಸಾಕವ್ವನ ಹಟ್ಟಿಯ ಬಡತನ ಮಾತ್ರ ಬಯಲಾಯಿತು. ದೇವ್ರ ಮನೆಗೂ ನುಗ್ಗಿದರು. ಬೂಟುಗಾಲಲ್ಲಿ. ಗುರುಸಿದ್ದು ಮಾರಿಗುಡಿಯಿಂದ ಮನೆಗೆ ಬಂದಾಗ ಹಿಡಿದು ತನಿಖೆ ಮಾಡಿದರು. ಆದರೂ ಏನೂ ಏನೇನೂ ಪತ್ತೆ ಆಗಲಿಲ್ಲ.
- ರೇವಣ್ಣ ಪೆಚ್ಚಾದ. ಇದನ್ನೆಲ್ಲ ನೋಡಿದ ಎತ್ತಪ್ಪ ಸಾಹುಕಾರರಿಗೇನೋ "ಹೊಟ್ಟೆ ಒಳಗೆ ಬೆಂಕಿ ಇಟ್ಕೊಂಡ ಈ ರಾಕ್ಷಸ ಜನ ತಿಂದಿರಲೂ ಬಹುದು" ಎಂದುಕೊಂಡರು. ಪೊಲೀಸರೆಲ್ಲ ಹೊರಟಾಗ ಸಾಕವ್ವ ಸುಮ್ಮನಿರಲಾರದೆ ತನ್ನ ಹುಂಜ ಕಳುವಾದ ಮಾತನ್ನು ಇನ್ಸ್ ಪೆಕ್ಟರಿಗೆ ಹೇಳಿಕೊಂಡಳು. ಅವರು "ಹುಂಜ ಯಾವ ರೀತಿ ಇತ್ತು" ಎಂದು ಕೇಳಿದಾಗ, ಅದರ ಜೋಡಿ ಆಗಿದ್ದ ಒಂದು ದಪ್ಪ ಹುಂಜವನ್ನು ತೋರಿಸಿದಳು.
- ಇನ್ಸ್ಪೆಕ್ಟರ್ "ಭೇಷ್ ಚೆನ್ನಾಗಿದೆ ಮುದ್ಕಿ. ಈ ಹುಂಜ್ನ ಹಿಡ್ಕೊಂಡು... ಇದನ್ನು ಅದ ಹುಡ್ಕೊಂಡು ಬರಾಕೆ ಕಳಿಸ್ತೀನಿ" ಅಂದರು. ಅವಳು ಏನೋ ಹೇಳ ಹೊರಟಾಗ, ಕೂಡಿದ್ದ ಜನ ಎಲ್ಲ ನಕ್ಕರು. ಆಗ ಅವಳಿಗೆ ನಿಜ ಅರಿವಾಯ್ತು. ಕೊನೆಗೆ ಹುಂಜದ ಕಾಲಿಗೆ ಹಗ್ಗ ಬಿತ್ತು. ಅದೂ ಪೊಲೀಸಿನೋರ ಜೊತೆ ಜೀಪಿನಲ್ಲಿ ಹೋಯಿತು. ಸಪ್ಪೆಯಾಗಿ ಕಾಣಿಸುವ ಈ ಸಾರಾಂಶವು ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತದೆ.
Kannada Novels Free Download in PDF Format
- Kannada Novels Free Pdf Download
- Kannada Romantic Novels Free Pdf Download
- Parva Kannada Novels Free Pdf Download
- Karvalo Kannada Novels Free Pdf Download
- Avarana Kannada Novels Free Pdf Download
- Heli Hogu Kaarana Kannada Book Novels Free Pdf Download
- Ladies Hostel Kannada Novels Free Pdf Download
- Chidambara Rahasya Kannada Novels Free Pdf Download
- Tulasi Dalam Kannada Novels Free Pdf
- Daatu Kannada Novels Free Pdf Download
- Duddu Duddu Kannada Novels Free Pdf Download
- Poornachandra Tejaswi Books Novels Free Pdf Download
- Kannada Detective Novels Free Pdf Download
- Yayati Kannada Novels Free Pdf Download
- Triveni Kannada Novels Free Pdf Download
- Malegalalli Madumagalu Kannada Novels Free Pdf Download
- Gruhabhanga Kannada Novels Free Pdf
- Ta Ra Su Books Novels Free Pdf Download
- Mookajjiya Kanasugalu Kannada Novels
- Samskara Kannada Book Novels Free Pdf Download
- Odalala Kannada Kadambari Novels Free Pdf Download
- Mk Indira Kannada Novels Free Pdf Dowload
- Vivaha Bandhana Kannada Novels Free Pdf
- Kuvempu Kadambari Kannada Novels Free
- Chandragiri Theeradalli Kannada Novels
- Hombisilu Kannada Novels Free Pdf
- Vamshavruksha Kannada Novels Free Pdf
- Chomana Dudi Book Novels Free Pdf
- Marali Mannige Kannada Novels Free Pdf Download
- Madhavi Kannada Novels Free Pdf Download
- Yandamoori Veerendranath Kannada Novels
- Mouni Kannada Novels Free Pdf Download
0 Comments:
Post a Comment